ಹಿಂದುಳಿದ ವರ್ಗದವರ ಕ್ಷೇಮಾಭಿವೃದ್ದಿ

ಸರ್ಕಾರ ಹಿಂದುಳಿದ ವರ್ಗದವರಿಗೆ (OBC’s) ಅರ್ಥಿಕ ಸಹಾಯ ನೀಡಿ ಅವರು ತಮ್ಮ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕಾರ ನೀಡಿದೆ
ಯೋಜನೆ/ಸೇವೆಗಳು
  • ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ
  • ಶುಲ್ಕ ರಿಯಾಯಿತಿ
  • ವಿದ್ಯಾಸಿರಿ
ಅರ್ಹತೆ
  • ಹನ್ನೊಂದನೇ ತರಗತಿಯಿಂದಿಡಿದು ಪಿಎಚ್ ಡಿ ಮಾಡುತ್ತಿರುವ ವಿದ್ಯಾರ್ಥಿಗಳವರೆಗು
  • ಮುಸ್ಲಿಂ, ಕ್ರೈಸ್ತ, ಜೈನ, ಬೌದ್ದ, ಸಿಖ್ ಮತ್ತು ಪಾರ್ಸಿಗಳ ಹೊರತುಪಡಿಸಿ ಬೇರೆಲ್ಲಾ ಹಿಂದುಳಿದ ಹಾಗು OBCಗಳು ಅರ್ಹರು
  • ರೂ 2.5 ಲಕ್ಷ ವಾರ್ಷಿಕ ವರಮಾನವಿರುವ ಕ್ಯಾಟಗರಿ 1 ವಿದ್ಯಾರ್ಥಿಗಳು ಹಾಗು ರೂ 1 ಲಕ್ಷ ವರಮಾನವಿರುವ ಕ್ಯಾಟಗರಿ IIA, IIIA, IIIB, OBC ಮತ್ತು ಇತರ OBC ವಿದ್ಯಾರ್ಥಿಗಳು
  • ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಹರ
  • ಹಿಂದಿನ ತರಗತಿ/ಸೆಮಿಸ್ಟರ್ಗಳಲ್ಲಿ ಉತ್ತಿರ್ಣರಾಗಿರಬೇಕು
  • ಆಗಲೇ ಬೇರೊಂದು ವಿದ್ಯಾರ್ಥಿವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಹರಲ್ಲ
  • ಪೋಷಕರ ಇಬ್ಬರು ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿವೇತನ. ಹೆಣ್ಣು ಮಕ್ಕಳಿಗೆ ಈ ನಿರ್ಭಂದ ಅನ್ವಯವಾಗುವುದಿಲ್ಲ
  • ಮೆಟ್ರಿಕ್ ತರಗತಿ ಮುಗಿಸಿದ ನಂತರ ಅದಕ್ಕೆ ಸಮನಾದ ಬೇರೆಯ ಕೋರ್ಸ್ ಮಾಡುತ್ತಿದ್ದರೆ ಈ ವಿದ್ಯಾರ್ಥಿವೇತನಕ್ಕೆ ಅರ್ಹರಲ್ಲ
  • ಒಂದು ಹಂತದ ಶಿಕ್ಷಣ ಮುಗಿಸಿ ಅದಕ್ಕೆ ಸಮನಾದ ಇನ್ನೊಂದು ಕೋರ್ಸ್ ಆಯ್ಕೆ ಮಾಡಿಕೊಂಡರೆ ಉದಾ: ಪ್ರಥಮ ಬಿ.ಎಸ್ಸಿ ನಂತರ ಪ್ರಥಮ ಬಿ.ಎ ಅಥವಾ ಬಿ.ಕಾಂ ನಂತರ ಬಿ.ಎ ಅಥವಾ ಒಂದು ವಿಷಯದಲ್ಲಿ ಎಂ.ಎ ಮುಗಿಸಿ ಇನ್ನೊಂದು ವಿಷಯದಲ್ಲಿ ಎಂ.ಎ ಮಾಡುವ ವಿದ್ಯಾರ್ಥಿಗಳು ಅರ್ಹರಲ್ಲ
  • ಒಂದು ವೃತ್ತಿ ಶಿಕ್ಷಣ ಪೂರ್ಣಗೊಳಿಸಿದ ನಂತರ ಉದಾಹರಣೆಗೆ ಎಲ್ಎಲ್ ಬಿ ನಂತರ ಬಿ.ಟಿ ಅಥವಾ ಬಿ.ಎಡ್ ಮಾಡಲಿಚ್ಚಿಸುವವರು ವಿದ್ಯಾರ್ಥಿವೇತನಕ್ಕೆ ಅರ್ಹರಲ್ಲ
  • ಇಂಟರ್ನ್ಶಿಪ್ ಮಾಡುತ್ತಿರುವ ಅಭ್ಯರ್ಥಿಗಳು ಅರ್ಹರಲ್ಲ
ಅಗತ್ಯವಾಗಿ ಬೇಕಾಗಿರುವ ದಾಖಲೆಗಳ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್ (ಜೆರಾಕ್ಸ್ ಪ್ರತಿ)
  • ಎಸ್ಎಸ್ಎಲ್ ಸಿ ಅಂಕಪಟ್ಟಿ
  • ಹಿಂದಿನ ತರಗತಿಯ ಅಂಕಪಟ್ಟಿ
  • ಒಂದು ಪಾಸ್ಪೋರ್ಟ್ ಫೋಟೋ
  • ಆದೇಶ ಪ್ರಪತ್ರ
  • ಆಧಾರ್ ಒಪ್ಪಿಗೆ ಪ್ರಪತ್ರ
  • ಅಂಗವಿಕಲ ದೃಡಿಕಾರಣ ಪತ್ರ
  • ಹಾಸ್ಟೆಲ್ ಶುಲ್ಕ ರಸೀತಿ
  • ಕಾಲೇಜು ನೋಂದಣಿ ರಸೀತಿ
ಉಸ್ತುವಾರಿ ಅಧಿಕಾರಿಗಳ ಇಮೇಲ್
  • bcdbng@kar.nic.in
All rights reserved by Government of Karnataka